Weather Underground PWS IKARNATA11

Friday, July 3, 2009

Kannada wisdwom quotes

Few ಕನ್ನಡ ಗಾದೆಗಳು & movie dialogues...

# ಆಯಕಟ್ಟು ಇಲ್ಲದವನಿಗೆ ಆರು ಕಟ್ಟು ವಿಭೂತಿ..
# ಛಲಗಾರ ಚಟ್ಟ ಏರಿದ, ಭಂಡ ಬದುಕಿದ...
# ತಿನ್ನೋದು ತಂಗಳು ಆದರು ಮುಕ್ಕಳಿಸೋದು ಪನ್ನೀರು...
# ಕಷ್ಟ ಕಾಲದಲ್ಲಿ ನೆಂಟರ ಮನೆ ಬಾಗಿಲಿಗೆ ಹೋಗಬಾರದು...
# ಅನ್ನ ಹಾಕಿದ ಮನೆ ಕೆಟ್ಟು ಹೋಗೊದಿಲ್ಲ, ಗೊಬ್ಬರ ಹಾಕಿದ ಹೊಲ ಹಾಳಾಗುವುದಿಲ್ಲ...
# ಹನ್ನೊಂದು ತಿಂಗಳು ಇದ್ದವರು ಇನ್ನೊಂದು ತಿಂಗಳು ಇರದೇ ಇರ್ತಾರೆ?
# ಮಾಡಬಾರದು ಮಾಡಿದ್ರೆ ಆಗಬಾರದು ಆಗುತ್ತೆ
# ಬೀಸೊ ದೊಣ್ಣೆ ತಪ್ಪಿಸಿಕೊಂಡರೆ ನೂರು ವರುಷ ಆಯಸ್ಸು
# ಮಳೆಗಾಲದಲ್ಲಿ ಛತ್ರಿ ಬಿಡಬೇಡ, ಚಳಿಗಾಲದಲ್ಲಿ ಹೆಂಡತಿನ ಬಿಡಬೇಡ
# ಕೂಸು ಹುಟ್ಟೊಕೆ ಮುಂಚೆ ಕುಲಾವಿ ಹೊಲೆಸಿದರಂತೆ
# ಹೆತ್ತವರಿಗೆ ಹೆಗ್ಣ ಕೂಡ ಮುದ್ದು, ಕಟ್ಕೊಂಡವರಿಗೆ ಕೋಡಂಗಿ ಕೂಡ ಮುದ್ದು
# ಒಂದು ಹೊತ್ತು ತಿನ್ನುವವನು ಯೋಗಿ , ಎರಡು ಹೊತ್ತು ತಿನ್ನುವವನು ಭೋಗಿ, ಮೂರು ಹೊತ್ತು ತಿನ್ನುವವನು ರೋಗಿ, ನಾಲ್ಕು ಹೊತ್ತು ತಿನ್ನೋವ್ನ ಎತ್ತ್ಕೊಂಡುಹೋಗಿ
# ಊರಿಗೆ ಬಂದವಳು ನೀರಿಗೆ ಬರದೆ ಇರುವಳೇ?
# ಮೀಸೆ ಬಂದವನಿಗೆ ದೇಶ ಕಾಣೋಲ್ಲ ಅದೇನೋ ಬಂದವಳಿಗೆ ನೆಲ ಕಾಣೋಲ್ಲ
# ಕಜ್ಜಿ ಹೋದರು ಕಡಿತ ಹೋಗಲ್ಲ
# ಹಣ್ಣು ಇರೋ ಮರಕ್ಕೆ ಹಕ್ಕಿ ಬರ್ತಾವೆ, ಹೆಣ್ಣು ಇರೋ ಮನೆಗೆ ಗಂಡು ಬರ್ತಾವೆ
# Rajkumar dialogue in Aakasmika film
ಮನಸ್ಸು ನೊಣ ಇದ್ದ ಹಾಗೆ, ತಿಂಡಿ ಮೇಲು ಕುತ್ಕೊಳುತ್ತೆ ತಿಪ್ಪೆ ಮೇಲು
ಕುತ್ಕೊಳುತ್ತೆ .
# Jaggesh dialogue in EddeLu Manjunatha movie
1) ದಿನಾ ಬರೋ ನೆಂಟ ದಿನಾ ಅಳೋ ಹೆಂಡತಿ, ಅಷ್ಟೊಂದು ಚೆನ್ನಾಗಿರೋಲ್ಲ
2) ನನಿಗೆ ಮದುವೆ ಬೇಡ
ಯಾಕಪ್ಪ, ನಿನಗೆ ಮದುವೆ ಯಾಕೆ ಬೇಡ, ನಿನಗೆ ವಯಸ್ಸು ಆಗಿಲ್ಲವೇ?
ಇಬ್ಬಿರ್ ನ ಮಲಿಗಿಸೋಕೆ ಎಷ್ಟು ಜನ ಎದ್ದಿರಬೇಕು, ನನಿಗೆ ಮದುವೆ ಬೇಡ ಬಿಡಿ...
....

No comments: